ಬೈಲಹೊಂಗಲ- ತಾಲ್ಲೂಕಿನ ನೇಸರಗಿ ಹೋಬಳಿಯ ಕಿತ್ತೂರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ನಾಗನೂರ ಗ್ರಾಮದಲ್ಲಿ ಇತ್ತಿಚೇಗೆ ಬೆಂಗಳೂರಿನ ವಿಕೆಎಂ ಕಲಾವಿದರ ಸಂಘದ ಪ್ರತಿಷ್ಠಿತ ಡಾ.ಬಿ.ಆರ್.ಅಂಬೇಡ್ಕರ ಪ್ರಶಸ್ತಿ ಪಡೆದಿರುವ ಹಿರಿಯ ಪತ್ರಕರ್ತ,ಸಾಹಿತಿ,ಸಂಘಟಕ,ಕನ್ನಡ ಕಟ್ಟಾಳು ಶ್ರೀ ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ ( ನೇಸರಗಿ)ಇವರಿಗೆ ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕರಾದ ಶ್ರೀ ರಮೇಶ ಸೂರನಾಯ್ಕ ಪರವಿನಾಯ್ಕರ ಅವರು ಸನ್ಮಾನಿಸಿ, ಅಭಿನಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ,ಮುಂಜಾನೆಯ ಬೆಳಕು ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ನಂದೀಶ ಮಹಾಂತೇಶ ಮೆಣಸಿನಕಾಯಿ (ಬೆಳಗಾವಿ), ಪತ್ರಕರ್ತ ಅಪ್ಪಯ್ಯ ಕಮ್ಮಾರ ಉಪಸ್ಥಿತರಿದ್ದರು.
ಡಾ.ಬಿ.ಆರ್.ಅಂಬೇಡ್ಕರ ಪ್ರಶಸ್ತಿ ಪಡೆದಿರುವ ಸಿ ವಾಯಾ ಮೆಣಸಿನಕಾಯಿ ಗೆ ಸತ್ಕಾರ
ಅಅಅ

Comments






